Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೀತೆಯೊಂದನ್ನು ಚಿತ್ರಿಸಿಕೊಂಡ ೩ಆ ಕಠಾರಿವೀರ
Posted date: 04 Wed, Apr 2012 ? 02:46:54 PM

ವೃಷಭಾದ್ರಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಹೆಸರಾಂತ ನಿರ್ಮಾಪಕ ಮುನಿರತ್ನ ಅದ್ದೂರಿ ತಾರಾಗಣದೊಂದಿಗೆ ಸುಮಾರು ಹದಿನೈದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಪ್ರಪ್ರಥಮ   ೩ಡಿ ಕಠಾರಿವೀರ ಸುರಸುಂದರಾಂಗಿ ಚಿತ್ರಕ್ಕೆ ಗೀತೆಯೊಂದರ ಚಿತ್ರೀಕರಣ ನಡೆಯಿತು.

ಕುಲುಮನಾಲಿ ಸುತ್ತಮುತ್ತ ಉಪೇಂದ್ರ, ರಮ್ಯಾ ಅಭಿನಯದ ಈ ಗೀತೆಯನ್ನು ನೊಬೆಲ್ ನೃತ್ಯ ನಿರ್ದೇಶನದೊಂದಿಗೆ ಹೆಚ್.ಸಿ. ವೇಣು, ಛಾಯಾಗ್ರಹಣದಲ್ಲಿ ನಿರ್ದೇಶಕ ಸುರೇಶ್ ಕೃಷ್ಣ ೩ಡಿ ಹಾಗೂ ೨ಡಿ ಕ್ಯಾಮರಾ ಬಳಸಿ ಚಿತ್ರಿಸಿಕೊಂಡರು.  ಚಿತ್ರಕ್ಕೆ ಮತ್ತೊಂದು ಗೀತೆಯ ಚಿತ್ರೀಕರಣ ಬಾಕಿ ಇದ್ದು, ಈ ಗೀತೆಯನ್ನು ಇದೇ ೭ ರಿಂದ ಜೋರ್ಡಾನ್‌ನಲ್ಲಿ ಚಿತ್ರಿಸಲಾಗುವುದು ಎಂದು ನಿರ್ಮಪಕ ಮುನಿರತ್ನ ತಿಳಿಸಿದ್ದು, ಚಿತ್ರವು ಈ ತಿಂಗಳ ಅಂತ್ಯದಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದಿದ್ದಾರೆ.

ಚಿತ್ರಕ್ಕೆ ಉಪೇಂದ್ರರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ವೇಣು ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ಚಿನ್ನಿ ಪ್ರಕಾಶ್ ನೃತ್ಯ, ಕಿರಣ್ ಕಲೆ, ಹರ್ಷ ಸಂಕಲನ, ರವಿವರ್ಮ ಸಾಹಸ, ಸುಂದರಂ, ಮಂಜಯ್ಯ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರವನ್ನು ಯಶಸ್ವಿ ನಿರ್ದೇಶಕ ಸುರೇಶ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ಉಪೇಂದ್ರ, ಅಂಬರೀಶ್, ರಮ್ಯಾ, ಶ್ರೀಧರ್, ದೊಡ್ಡಣ್ಣ, ಸಂಗೀತಾ, ಟೆನ್ನಿಸ್‌ಕೃಷ್ಣ, ಚೇತನ್, ಸುಮನ್ ರಂಗನಾಥ್, ರಮಣಿತೋ ಚೌಧರಿ, ರಿಷಿಕಾಸಿಂಗ್ ಮುಂತಾದ ವರಿದ್ದು, ಜಯಕರ್ನಾಟಕ ಸಂಸ್ಥೆಯ ಮುಖ್ಯಸ್ಥ ಮುತ್ತಪ್ಪರೈ ಕೂಡಾ ಚಿತ್ರದಲ್ಲಿ ವಿಶಿಷ್ಠ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೀತೆಯೊಂದನ್ನು ಚಿತ್ರಿಸಿಕೊಂಡ ೩ಆ ಕಠಾರಿವೀರ - Chitratara.com
Copyright 2009 chitratara.com Reproduction is forbidden unless authorized. All rights reserved.